ಬಸವಣ್ಣನವರ ವಚನಗಳಲ್ಲಿ ದಲಿತ ಪ್ರಜ್ಞೆ
Abstract
ದಲಿತ'ವೆಂಬ ಪದಕ್ಕೆ ಸಾಹಿತ್ಯ ಮತ್ತು ಸಾಮಾಜಿಕ ವಲಯಗಳಲ್ಲಿ ಬಹು ಚರ್ಚಿತವಾಗಿದೆ. ದಲಿತರಾರು? ಅನ್ನುವುದಕ್ಕೆ ವಿದ್ವಾಂಸರ ಪ್ರಕಾರ ಅಸ್ಪೃಶ್ಯರು ಮಾತ್ರವೆಂಬುದು. ಇನ್ನು ಕೆಲವರ ಪ್ರಕಾರ ತುಳಿತಕ್ಕೊಳಗಾದ ಕಾರ್ಮಿಕರು, ಶ್ರಮಜೀವಿಗಳು, ಕೃಷಿ ಕಾರ್ಮಿಕರು, ಅಲೆಮಾರಿಗಳು. ಆದಿವಾಸಿಗಳು ಮತ್ತು ಮಹಿಳೆಯರೆಂದು. ನಿಘಂಟುವಿನಲ್ಲಿ ಶೋಷಿತರು ಎಂದರೆ ದಳ, ಗುಂಪು, ಸೈನ್ಯ, ಶೋಷಿತ, ಹಿಂದುಳಿದವನು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕೆಳಮಟ್ಟದವರು. ದಮನಕ್ಕೊಳಗಾದವರು ಹೀಗೆ ಅರ್ಥಗಳಿವೆ. ಮಹಾತ್ಮ ಡಾ.ಅಂಬೇಡ್ಕರ್ ಅವರು ಕೂಡ ದಲಿತವೆಂಬ ಪದಕ್ಕೆ 'ಡಿಪ್ರೆಸ್ಟ್' ಎಂಬ ಪದವನ್ನು ಈ ಅರ್ಥದಲ್ಲಿಯೇ ಬಳಸಿದ್ದಾರೆ.





