ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆ
Abstract
ಇರುವ ಗೊಡ್ಡು ಸಂಪ್ರದಾಯಗಳು, ದೇವರು, ಧರ್ಮ, ಮತ, ಸ್ವರ್ಗ, ನರಕ, ಮಾಟ - ಮಂತ್ರ ಮುಂತಾದ ವಿಷಯಗಳಿಂದಾಗಿ ಅನೇಕ ಸಮಸ್ಯೆ ಹಾಗೂ ಸವಾಲುಗಳಿಗೆ ಅವರು ತನ್ನದೇ ಆದ ಆಲೋಚನಾ ಕ್ರಮ ಹಾಗೂ ಚಿಂತನೆಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಪರಿಹಾರ ಕಂಡುಕೊಳ್ಳುವಲ್ಲಿ ಅವನ ಸಂಸ್ಕೃತಿಯ ಪರಂಪರೆ ಮತ್ತು ಭಾಷೆಯನ್ನು ಬಳಸುವುದು, ಅವನ ಬುದ್ದಿಶಕ್ತಿಯ ಬಲದಿಂದ ಮಾತ್ರ ಸಾಧ್ಯ. ವೈಚಾರಿಕತೆ ಎಂದರೆ ಯತಾಸ್ಥಿತಿಯನ್ನು ಶಂಕಿಸುವುದು ಸಂಪ್ರದಾಯದಲ್ಲಿ ಸಂಕೇತಗಳಲ್ಲಿ, ಮೌಲ್ಯಗಳಲ್ಲಿ, ಆಚರಣೆಗಳಲ್ಲಿ, ಘಟನೆಗಳಲ್ಲಿ ಇನ್ನೂ ಹಲವು ಸಂಗತಿಗಳಲ್ಲಿ ಸರಿ ಸಮಾನತೆ ಕಾಣದಿದ್ದಾಗ ನಮ್ಮಲ್ಲಿ ಮಾನಸಿಕ ಸಂಘರ್ಷ ನಡೆದು ತಾರ್ಕಿಕವಾದ ವಿವೇಚನೆ ಹೊರಬಂದು ಭಿನ್ನವಾದ ಪ್ರತಿಕ್ರಿಯೆ 'ವೈಚಾರಿಕತೆ' ಎನಿಸಿಕೊಳ್ಳುವುದು







