ದಯವಿಲ್ಲದ ಧರ್ಮವಾವುದಯ್ಯ
Abstract
ಭಗವಂತನೊಲಿದೊಡೆ ಒಣಗಿದ ಮರ ಚಿಗುರೊಡೆದು ಚಿಗುರಿತು. ಬರಡು ದನ - ಎಮ್ಮೆಗಳು ಕರು ಹಾಕಿ ಹಾಲು ನೀಡಿತು. ವಿಷ ಅಮೃತವಾದೀತು. ನಮಗೆ ಬೇಕಾದ ಎಲ್ಲಾ ವಸ್ತುಗಳು ದೇವರ ಅನುಗ್ರಹದಿಂದ ದೊರೆಯಲು ಸಾಧ್ಯ ಎಂಬುದನ್ನು ಬಸವಣ್ಣನ ಈ ವಚನಗಳಿಂದ ತಿಳಿಯಬಹುದಾಗಿದೆ. ಅಂತಹ ಮಾನವೀಯತೆ ಮನುಷ್ಯ ಮೆರೆಯಬೇಕು. ದಾನಗಳಲ್ಲಿ ಶ್ರೇಷ್ಠವಾದ ದಾನ ಅನ್ನದಾನ. ಅಂತಹ ಅನ್ನದಾನ ಮನುಷ್ಯ ಮಾಡಬೇಕೆಂದು ಬಸವಣ್ಣ ಹೇಳಿದ್ದಾನೆ. ಅನ್ನ ದಾಸೋಹದ ಪರಿಕಲ್ಪನೆ ಕೊಟ್ಟಿರುವುದು ಇದೇ ಅರ್ಥದಲ್ಲಿ. ಊಟ ಮಾಡದ ಕಲ್ಲು ಮೂರ್ತಿಗೆ ನೈವೇದ್ಯ ಹಿಡಿಯುವ ಜನರಿಗೆ ಬಸವಣ್ಣ ಬಡತನದಿಂದ ಬಳಲುವ ಭಿಕ್ಷುಕನಿಗೆ ಆ ಅನ್ನವನ್ನು ನೀಡಿ ಅವನ ಹಸಿವು ತಣಿಸಬೇಕೆಂದು ಹೇಳುತ್ತಾನೆ





