ಗಿರೀಶ್ ಕಾರ್ನಾಡ್ ನಾಟಕಗಳಲ್ಲಿ ಸಾಂಸ್ಕೃತಿಕ ಮುಖಾಮುಖಿ
Abstract
ಭಾರತದ ಪ್ರಮುಖ ಸಾಂಸ್ಕೃತಿಕ ರಾಯಭಾರಿಯಾದ ಗಿರೀಶ್ ಕಾರ್ನಾಡರು ಸಾಧಿಸಿದ ಸಾಧನೆ, ಪರಿಶ್ರಮ ಗಮನಾರ್ಹವಾದುದು. ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಗಿರೀಶ್ ಕಾರ್ನಾಡ್ ರವರು ಕನ್ನಡ ಕೃಷಿ ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರವಾದದ್ದು, ಇವರ ಬುದ್ದಿವಂತಿಕೆಯಿಂದ ಹಲವು ಕಾದಂಬರಿಗಳು, ನಾಟಕಗಳು, ಆತ್ಮಕತೆಗಳನ್ನು ರಚಿಸಿದ್ದಾರೆ. ಇವರು ಮಹಾರಾಷ್ಟ್ರದ ಮಾಥೇರಾನ್ ಸಬರಕಾಂತ ದಲ್ಲಿ ತಂದೆ ಡಾ॥ ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ ರವರ ಮಗನಾಗಿ ಜನಿಸಿದರು. ಇವರು ೧೯-೦೫-೧೯೩೮ ರಿಂದ ೧೦-೦೬-೨೦೧೯ ರ ಕಾಲಾವಧಿಯಲ್ಲಿ ಜೀವಿಸಿದ್ದು, ಈ ಕಾಲಗಘಟ್ಟದಲ್ಲಿ ಆನೇಕ ಕೃತಿಗಳನ್ನು ಬರೆದಿದ್ದು, ಕನ್ನಡ ಸಾಹಿತ್ಯಕ್ಕೆ ೧೯೯೮ ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಇನ್ನೂ ಹಲವು ಪ್ರಶಸ್ತಿಗಳನ್ನು ತನ್ನ ಹೆಸರಲ್ಲಿ ಬರೆದುಕೊಂಡಿದ್ದಾರೆ. ಇವರಿಗೆ ಇದ್ದ ಮುಖಗಳು ಅಷ್ಟಿಷ್ಟಲ್ಲ ಅವರದು ಬಹುಮುಖಿ ವ್ಯಕ್ತಿತ್ವ ಅವರೊಳಗೊಬ್ಬ ಉತ್ತಮ ಕಲಾವಿದ, ನಾಟಕಕಾರ, ಲೇಖಕ, ರಂಗಕರ್ಮಿ, ಸಿನಿಮ ನಟ, ನಿರ್ದೇಶಕ, ಚಿಂತಕ ನೆಲೆಸಿದ್ದಾನೆ







